Saturday, February 9, 2008
ಏನೋ ಒಂಥರಾ...
ಏನು ಹೇಳಲಿ? ಜೀವನವೇ ಒಂಥರಾ ಆಗಿಬಿಟ್ಟಿದೆ. ಮೊನ್ನೆ ಅಪೋಲೋ ದಿಂದ ೪೭೯ ( ಬದರ್ ಪುರದಿಂದ ಪಂಜಾಬಿ ಬಾಗ್ ಹೋಗುವ ಬಸ್ಸು) ಬಸ್ಸು ಏರಿದೆ. ತುಂಬಾ ರಷ್ಯು. ಕೂರಲು ಜಾಗವೇ ಇರಲಿಲ್ಲ, ನಿಂತುಕೊಂಡೆ ಇದ್ದೆ. ಯಾವ ಗಂಡಸೂ ಎದ್ದು ಸೀಟು ಕೊಡಲಿಲ್ಲ, ನಾನು ಆಗ್ರಹ ಪಡಿಸಲೂ ಇಲ್ಲ. ಆದರೆ ಸುತ್ತಲೂ ಸುಮ್ಮನೇ ಕಣ್ನಾಡಿಸಿದೆ. ಯಾರಿಗೂ ಈ ಲೋಕದ ಪರಿವೆಯಿಲ್ಲದಂತೆ, ಯಾರಿಗೂ ಯಾರ ಹಂಗಿಲ್ಲದವರಂತೆ, ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದವರಂತೆ ತಮ್ಮ ತಮ್ಮ ಲೋಕದಲ್ಲೇ ಮುಳುಗಿದ್ದರು. ಒಬ್ಬ ಮೋಬೈಲ್ ನಲ್ಲಿ ಜಗತ್ತಿನಲ್ಲಿ ತಾನೊಬ್ಬನೇ ಇದ್ಡೇನೆ, ಎನ್ನುವಂತೆ ಜೋರು, ಜೋರಾಗಿ ಮಾತನಾಡುತ್ತಿದ್ದ, ಅದೇ ರೀತಿ ಒಬ್ಬ ಹುಡುಗಿತ ನ್ನ ಹುಡುಗನೊಂದಿಗೆ ವಾದಕ್ಕಿಳಿದಿದ್ದಳು, ಇನ್ನೊಬ್ಬ ಹೆಂಗಸು ಟೈಮಿಗೆ ಸರಿಯಾಗಿ ಆಫೀಸ್ ತಲುಪಲಾಗದೇ ತನ್ನ ಸಹೋದ್ಯೋಗಿಯೊಬ್ಬರಿಗೆ ತಮ್ಮ ಬಾಸ್ ಗೆ ತಿಳಿಸುವಂತೆ ಅಲವತ್ತುಕೊಳ್ಳುತ್ತಿದ್ದರು. ಇನ್ಯಾರೋ ರಾಜಕೀಯ ಸುದ್ದಿ, ಮಾಯಾವತಿಯ ಸಾಹಸವನ್ನೂ , ಬ್ರಷ್ಟಾಚರದಲ್ಲಿ ಅವಳೇನೂ ಕಮ್ಮಿಯಿಲ್ಲವೆಂದೂ ಒಬ್ಬನೆಂದರೇ ಅವಳಷ್ಟು ಶಿಸ್ತಿನ, ಕಠೋರ ಪ್ರವೃತ್ತಿಯವರೇ ಉತ್ತರ ಪ್ರದೇಶ ಅದರಲ್ಲೂ ಗಾಜಿಯಾಬಾದ್ ದಂತಹ ಗೂಂಡಾಗಿರಿ ಪ್ರದೇಶದಲ್ಲಿ ಮಾಯಾವತೀ ಆಡಳಿತ ನಡೆಸಿದಂತೆ ಮತ್ಯಾರೂ ಅಲ್ಲಿ ಸೈ ಅಲ್ಲ ಬೀಡು ’ಎಂದು ಡಿಬೇಟ್ ನಡೆಸಿದ್ದರು. ಸೀಟು ಸಿಕ್ಕವರು ತಮಗೆ ಸಿಂಹಾಸನವೇ ಸಿಕ್ಕಿದೆ ಎನ್ನುವಂತೆ ವಿರಾಜಮಾನರಾಗಿ ಕುಳಿತಿದ್ದರು. ಸೀಟ್ ಸಿಕ್ಕ ಕೆಲ ಗಂಡಸರು ನಿದ್ದೆ ಮಾಡುತ್ತಿರುವವರಂತೆ ನಾಟಿಸುತ್ತಾ ಕಿಟಕಿಗೆ ತಲೆ ಆನಿಸಿಯೋ, ಇಲ್ಲಾ ತಲೆ ಕೆಳಗೆ ಹಾಕಿಕೊಂಡೋ ಕುಳಿತಿದ್ದರು. ಎಲ್ಲಿ ತಲೆ ಎತ್ತಿದರೇ ನಿಂತುಕೊಂಡ ಹೆಂಗಸರು ಜಾಗ ಖಾಲಿಮಾಡಿಸುತ್ತಾರೋ ಎಂಬ ಹೆದರಿಕೆಯಿಂದ ಗಟ್ಟಿಯಾಗಿ ಕಣ್ಣುಮುಚ್ಚಿಕೊಂಡು ನಿದ್ದ್ರೆಯಲ್ಲಿದ್ದರು. ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರನ್ನು ಅವರ ಲೋಕದಲ್ಲಿ ಬಿಟ್ಟರೇ ಉಳಿದವರೆಲ್ಲ ತಮ್ಮ ತಮ್ಮ ಲೋಕದಲ್ಲಿ ವಿಶಿಷ್ಟದವರಂತೆ ತುಂಬಾ ಬಿಸಿಯಾಗಿದ್ದರು. ಎಲ್ಲವನ್ನೂ ನೋಡುತ್ತಾ...ನೋಡುತ್ತಾ...ಯಾಕೋ ಒಂಥರಾ ಅನಿಸತೊಡಗಿತು....ಏನೋ ಒಂಟಿತನಾ, ಶೂನ್ಯತೆ...ಲೋಕವೇ ವಿಚಿತ್ರ ಲೋಕದಂತೆ ಕಾಣಿಸತೊಡಗಿತು. ಈ ಮೊಬೈಲ್ ಲೋಕದಲ್ಲಿ ಮೊಬೈಲ್ ಮೊಬೈಲ್ ಸಮ್ಪರ್ಕವಿದೆ, ಗುರುತು ಪರಿಚಯವಿದೆ ಹೊರತು ಮನುಷ್ಯ ಮನುಷ್ಯರ ನಡುವೆ ಆಸುಪಾಸಿನಲ್ಲೇ ಇಲ್ಲ. ಇದ್ದವರು ನಿರ್ಜೀವಿಗಳಂತೆ ಕಾಣತೊಡಗಿದರು. ಎನೋ ಒಂಥರಾ ಕಸಿವಿಸಿಯಾಗತೊಡಗಿತು........
Subscribe to:
Post Comments (Atom)
1 comment:
ಪ್ರಿಯ ಸಿದ್ಧಾರ್ಥ್,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
Post a Comment